ಹಿಂದೂ ಧರ್ಮದ ಸಿದ್ಧಾಂತ ಯಾರ ವಿರುದ್ಧವೂ ಅಲ್ಲ. ಹಿಂದೂ ಧರ್ಮವು ಪ್ರೀತಿ, ನಂಬಿಕೆ ಮತ್ತು ಅನ್ಯೋನ್ಯತೆಯ ಪ್ರತೀಕ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಪ್ರತಿಪಾದಿಸಿದರು. ಹಿಂದುತ್ವ ಯಾವುದೇ ಹಗೆತನ ಅಥವಾ ವಿರೋಧದಿಂದ ಕೂಡಿಲ್ಲ. ಆದರೆ ಪ್ರೀತಿ, ನಂಬಿಕೆ ಮತ್ತು ಆತ್ಮೀಯತೆಯ ಸಿಂಚನವಾಗಿದೆ ಎಂದು ಭಾಗವತ್ ಸರಸ್ವತಿ ಶಿಶು ಮಂದಿರದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಹಿಂದುಧರ್ಮದ ಸಿದ್ಧಾಂತವನ್ನು ಪ್ರತಿಪಾದಿಸಿದರು.
ಆದಾಗ್ಯೂ ದುರ್ಬಲವಾಗಿ ಉಳಿಯುವುದು ಹಿಂದುತ್ವವಲ್ಲ. ಹಿಂದುಗಳು ಅಸಹಿಷ್ಣುಗಳಾಗದೇ ಸರ್ವರಿಗೂ ಆಪ್ಯಾಯಮಾನವಾದ ಸಮಾಜದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಸಮಾಜವು ನಮ್ಮ ದೇವರು, ನಾವು ಸಮಾಜದ ಸೇವೆಗೆ ಇಲ್ಲಿದ್ದೇವೆ. ನಾವು ಪ್ರತಿಯಾಗಿ ಏನು ಸಿಗುತ್ತದೆಂದು ಯೋಚಿಸಬಾರದು. ಹಿಂದೂ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ನಾವು ದುಡಿಯುತ್ತಿದ್ದೇವೆ ಎಂದು ಭಾಗವತ್ ಹೇಳಿದರು.