ಬಿಹಾರದ ಬಗಾಹಾದಲ್ಲಿ ನಡದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ನವಾಡಾ ಸಂಸದ, ಭಾರತ ತನ್ನ ಜನಸಂಖ್ಯಾ ನೀತಿಯನ್ನು ವಿಫಲರಾದರೆ ನಮ್ಮ ಹೆಣ್ಣುಮಕ್ಕಳು ಸುರಕ್ಷಿತರಾಗಿರುವುದಿಲ್ಲ ಮತ್ತು ಪಾಕಿಸ್ತಾನದಲ್ಲಿರುವಂತೆ ಇವರನ್ನು ಕೂಡ ಬುರ್ಖಾದ ಹಿಂದೆ ಇರುವಂತೆ ಮಾಡಬೇಕಾಗುತ್ತದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಹಿಂದೂಗಳಿಗೂ ಮತ್ತು ಮುಸಲ್ಮಾನರಿಗೂ ಎರಡೇ ಮಕ್ಕಳಿರಬೇಕು. ನಮ್ಮ ಜನಸಂಖ್ಯೆ ಕಡಿಮೆಯಾಗುತ್ತಿದೆ. ಬಿಹಾರದ 7 ಜಿಲ್ಲೆಗಳಲ್ಲಿ ನಮ್ಮ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಗ್ಗುತ್ತಿದೆ. ಜನಸಂಖ್ಯಾ ನಿಯಂತ್ರಣದ ನಿಯಮಗಳನ್ನು ಬದಲಿಸಬೇಕಿದೆ. ಆಗಲೇ ನಮ್ಮ ಹೆಣ್ಣು ಮಕ್ಕಳು ಸುರಕ್ಷಿತವಾಗಿರುತ್ತಾರೆ. ಇಲ್ಲದಿದ್ದರೆ ಪಾಕಿಸ್ತಾನದಂತೆ ನಮ್ಮ ಹೆಣ್ಣುಮಕ್ಕಳಿಗೂ ಬುರ್ಖಾ ಹಿಂದೆ ಇಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.