"ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಕೆಲ ಪ್ರಮುಖ ಮಸೂದೆಗಳು ಮಂಡನೆಯಾಗಬೇಕಿದ್ದು, ಲಲಿತ್ ಮೋದಿ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸುಗಮ ಕಲಾಪಕ್ಕೆ ತಡೆಯಾಗಲಾರರು ಎಂದು ನಂಬಿದ್ದೇನೆ", ಎಂದು ಜೇಟ್ಲಿ ಹೇಳಿದ್ದಾರೆ.
"ಕೆಲ ಮಸೂದೆಗಳು (ಭೂ ಸ್ವಾಧೀನ ಕಾಯಿದೆಯ ತಿದ್ದುಪಡಿ, ಮತ್ತು ಸರಕು ಮತ್ತು ಸೇವಾ ತೆರಿಗೆ ಪರಿಚಯ) ದೇಶದ ಅಭಿವೃದ್ಧಿಗೆ ಬಹಳ ನಿರ್ಣಾಯಕ. ಯಾವುದೇ ರಾಜಕೀಯ ಪಕ್ಷ ಬೆಳವಣಿಗೆ ಮತ್ತು ಅಭಿವೃದ್ಧಿಯ ವಿರೋಧಿ ಸ್ಥಾನವನ್ನು ತೆಗೆದುಕೊಳ್ಳ ಬಯಸುವುದಿಲ್ಲ. ಲಲಿತ್ ಮೋದಿ ಪ್ರಕರಣವನ್ನು ಎತ್ತಿ ಕಲಾಪಕ್ಕೆ ತಡೆ ಒಡ್ಡುವುದಿಲ್ಲ ಎಂದು ನಾನು ಭಾವಿಸುತ್ತೇನೆ", ಎಂದು ಜೇಟ್ಲಿ ತಿಳಿಸಿದ್ದಾರೆ.