ಬೈನಾ ಬೀಚ್ನಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಬಹುಸಂಖ್ಯಾತರು ಉತ್ತರ ಕರ್ನಾಟಕದ ಬಡ ಹಿಂದುಳಿದ ಜಿಲ್ಲೆಗಳಿಂದ ವಲಸೆ ಬಂದವರಾಗಿದ್ದಾರೆ.ಕೃಷಿ ಕಾರ್ಮಿಕರಾಗಿದ್ದ ಅವರು ಉದ್ಯೋಗವನ್ನು ಅರಸಿ ಹಲವು ವರ್ಷಗಳ ಹಿಂದೆ ನೆರೆ ರಾಜ್ಯ ಗೋವಾಕ್ಕೆ ವಲಸೆ ಹೋಗಿದ್ದರು. ಬೀಚ್ನಲ್ಲಿ ವಾಸವಾಗಿದ್ದ ಕನ್ನಡಿಗರಿಗೆ ಗುಡಿಯಲುಗಳನ್ನು ತೆರವುಗೊಳಿಸುವಂತೆ ಗೋವಾ ಸರ್ಕಾರ ಈ ಮೊದಲೇ ನೋಟಿಸ್ ಜಾರಿಗೊಳಿಸಿತ್ತು.
ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಲ್ಲದೇ ಈ ಕುಟುಂಬಗಳು ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಾರೆ. ಅಲ್ಲದೇ ಈ ಮನೆಗಳಿರುವ ಸ್ಥಳ ಅಸುರಕ್ಷಿತವಾಗಿದ್ದು, ಪಾಕೃತಿಕ ವಿಕೋಪಗಳಿಗೆ ತುತ್ತಾಗುವ ಸಂಭವವಿದೆ .ಈ ಕಾರಣಕ್ಕಾಗಿ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಗೋವಾ ಸರ್ಕಾರ ತನ್ನ ಕೃತ್ಯಕ್ಕೆ ಸಮಜಾಯಿಸಿ ನೀಡುತ್ತಿದೆ.