ಪಶ್ಚಿಮ ದೆಹಲಿಯ ನಾಂಗಾಲೋಯಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು 61 ವರ್ಷದ ಅಶೋಕ್ ಎಂದು ಗುರುತಿಸಲಾಗಿದೆ. ಆತನ ಪತ್ನಿ ರಾಣಿ( 42) ಯಾರೋ ಒಬ್ಬರಿಗೆ 10ರೂಪಾಯಿ ಸಾಲವನ್ನು ನೀಡಿದ್ದಳು. ಅದರಿಂದ ಕುಪಿತನಾದ ಪತಿ ಜಗಳ ಪ್ರಾರಂಭಿಸಿದ್ದಾನೆ. ಇವರಿಬ್ಬರು ದೊಡ್ಡ ಸ್ವರದಲ್ಲಿ ವಾದ ಮಾಡುತ್ತಿದ್ದುದನ್ನು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ.