10 ರೂಪಾಯಿಗಾಗಿ ಪತ್ನಿಯ ಹತ್ಯೆ

ಬುಧವಾರ, 6 ಮೇ 2015 (11:13 IST)
ಅಪರಿಚಿತರೊಬ್ಬರಿಗೆ ಪತ್ನಿ 10 ರೂಪಾಯಿ ಸಾಲ ನೀಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ಪತಿಯೊಬ್ಬ ಆಕೆಯನ್ನು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣ ನವದೆಹಲಿಯಲ್ಲಿ ನಡೆದಿದೆ.

ಪಶ್ಚಿಮ ದೆಹಲಿಯ ನಾಂಗಾಲೋಯಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು 61 ವರ್ಷದ ಅಶೋಕ್ ಎಂದು ಗುರುತಿಸಲಾಗಿದೆ. ಆತನ ಪತ್ನಿ ರಾಣಿ( 42) ಯಾರೋ ಒಬ್ಬರಿಗೆ 10ರೂಪಾಯಿ ಸಾಲವನ್ನು ನೀಡಿದ್ದಳು. ಅದರಿಂದ ಕುಪಿತನಾದ ಪತಿ ಜಗಳ ಪ್ರಾರಂಭಿಸಿದ್ದಾನೆ. ಇವರಿಬ್ಬರು ದೊಡ್ಡ ಸ್ವರದಲ್ಲಿ ವಾದ ಮಾಡುತ್ತಿದ್ದುದನ್ನು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. 
 
ಆದರೆ ಪೊಲೀಸರು ಬರುವಷ್ಟರಲ್ಲಿ ಅವಘಡ ನಡೆದೇ ಹೋಗಿತ್ತು. ಅಶೋಕ್ ಚಾಕುವಿನಿಂದ ಪತ್ನಿಗೆ ಹಲವು ಬಾರಿ ಇರಿದಿದ್ದ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ