ಮೃತ ವೈದ್ಯ ಶಶಿ ಕುಮಾರ್ ಮತ್ತು ದಾಳಿಗೊಳಗಾದ ಡಾ.ಉದಯ್ ಹಾಗೂ ಡಾ.ಸಾಯಿಕುಮಾರ್ ಮತ್ತು ಕೆಲವು ಆನಿವಾಸಿ ಭಾರತೀಯರ ಪಾಲುದಾರಿಕೆಯಲ್ಲಿ ಇದೇ ಜನವರಿ 1ರಂದು 100 ಬೆಡ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಿದ್ದರು. ಆದರೆ ಉದಯ್ ಮತ್ತು ಸಾಯಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದುಕೊಳ್ಳುತ್ತಿದ್ದ ಶಶಿಕುಮಾರ್ ಈ ಕುರಿತು ಚರ್ಚಿಸಲು ಅವರಿಬ್ಬರನ್ನು ಹಿಮಾಯತ್ ನಗರಕ್ಕೆ ಕರೆಸಿದ್ದರ ಮಾತು ವಿವಾದಕ್ಕೆ ಹೋಗಿ ಕೋಪದ ಆವೇಶದಲ್ಲಿ ಉದಯ್ ಮೇಲೆ ಗುಂಡು ಹಾರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.