ಶಿವಸೇನೆ ಕಾರ್ಯಕರ್ತರು ಮುಖಕ್ಕೆ ಮಸಿ ಬಳೆದು ಪಾಕಿಸ್ತಾನ್ ಏಜೆಂಟ್ ಎಂದು ಟೀಕಿಸಿರುವುದನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸದಸ್ಯ ಸುಧೀಂದ್ರ ಕುಲ್ಕರ್ಣಿ, ನಾನು ಪಾಕಿಸ್ತಾನ್ ಏಜೆಂಟ್ ಅಲ್ಲ ಬದಲಿಗೆ ಭಾರತ ಮತ್ತು ಪಾಕಿಸ್ತಾನದ ಶಾಂತಿಯ ಏಜೆಂಟ್ ಎಂದು ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿಯವರ ನೈದರ್ ಎ ಹಾಕ್ ನಾರ್ ಎ ಡೊವ್ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮುನ್ನ, ಮಾತುಂಗಾದಲ್ಲಿರುವ ಮನೆಯ ಹೊರಗಡೆ ಸುಂಧೀಂದ್ರ ಕುಲ್ಕರ್ಣಿಯವರಿಗೆ ಶಿವಸೇನೆ ಕಾರ್ಯಕರ್ತರು ಕಪ್ಪು ಪೇಂಟ್ ಬಳೆದು ಅವಮಾನಿಸಿದ್ದರು.