ಬಿಎಮ್ಸಿ ಕ್ಷಯರೋಗದ ವಿರುದ್ಧ ಆಯೋಜಿಸಿದ್ದ 'ಟಿಬಿ ಸೋತರೆ, ದೇಶ ಗೆಲ್ಲುತ್ತದೆ' ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, 2,000 ವರ್ಷದಲ್ಲಿ ದೂರದರ್ಶನಕ್ಕಾಗಿ ಗೇಮ್ ಶೋ ಒಂದರ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದ ಸಂದರ್ಭದಲ್ಲಿ ತಮಗೆ ಟಿಬಿ ಕಾಯಿಲೆ ಕಾಣಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ.
ಸಾಮಾಜಿಕ- ಆರ್ಥಿಕ ಸ್ಥಾನಮಾನ ಗಣನೆಗೆ ಇಲ್ಲದೇ ಟಿಬಿ ಯಾರಿಗೆ ಬೇಕಾದರೂ ಬಾಧಿಸಬಹುದು ಎಂದು ಅವರು ಒತ್ತಿ ಹೇಳಿದರು. ಈ ಕಾಯಿಲೆಯಿಂದ ವರ್ಷದಲ್ಲಿ 3 ಲಕ್ಷ ಭಾರತೀಯರು ದುರ್ಮರಣವನ್ನಪ್ಪುತ್ತಾರೆ ಎಂದು ಅವರು, "ನನಗೆ ಇದ್ದಕ್ಕಿದ್ದಂತೆ ದುರ್ಬಲತೆ ಭಾವ ಕಾಡತೊಡಗಿತು. ವೈದ್ಯಕೀಯ ಪರೀಕ್ಷೆಗಳ ನಂತರ ನನಗೆ ಟಿಬಿ ತಗುಲಿದೆ ಎಂದು ಖಚಿತವಾಯಿತು. ಸತತ ಒಂದು ವರ್ಷ ಸಮರ್ಪಕವಾಗಿ ಔಷಧಿ ಸೇವಿಸಿ ನಾನೀ ಕಾಯಿಲೆಯನ್ನು ಜಯಿಸಿದೆ. ಇಂದು ಆ ಮಾರಕ ಕಾಯಿಲೆಯಿಂದ ಸಂಪೂರ್ಣ ಮುಕ್ತನಾಗಿ ನಿಮ್ಮ ಮುಂದೆ ನಿಂತಿದ್ದೇನೆ" ಎಂದ ಬಿಗ್ ಬಿ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವಂತೆ ಜನರಲ್ಲಿ ವಿನಂತಿಸಿಕೊಂಡರು.