ಹೆತ್ತವರು ನೋಡಿದ ಹುಡುಗಿಯನ್ನೇ ಮದುವೆಯಾಗುತ್ತೇನೆ: ಲಾಲು ಪುತ್ರ

ಗುರುವಾರ, 4 ಫೆಬ್ರವರಿ 2016 (14:21 IST)
ನನ್ನ ತಂದೆ-ತಾಯಿಗಳೇ ನನಗೆ ಹುಡುಗಿಯನ್ನು ನೋಡುತ್ತಾರೆ, ಅವರ ಇಚ್ಛೆ ಪ್ರಕಾರ ನಾನು ಮದುವೆಯಾಗುತ್ತೇನೆ ಎಂದು ಬಿಹಾರ್ ಉಪ ಮುಖ್ಯಮಂತ್ರಿ, ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಪ್ರಸಾದ್ ಹೇಳಿದ್ದಾರೆ. 

ಎಲ್ಲ ನಿರ್ಧಾರಗಳನ್ನು ತಂದೆ-ತಾಯಿಗಳೇ ತೆಗೆದುಕೊಳ್ಳುವಂತಹ ಕುಟುಂಬ ನಮ್ಮದು. ಹೀಗಾಗಿ ನನ್ನ ಮದುವೆ ಕುರಿತ ಸಂಪೂರ್ಣ ನಿರ್ಧಾನ ನನ್ನ ಹೆತ್ತವರದೇ. ಆದರೆ ನನ್ನ ಮದುವೆ ಯಾವಾಗ ಮತ್ತು ಎಲ್ಲಿ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ತೇಜಸ್ವಿ. 
 
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ ನನ್ನ ಕುಟುಂಬ ಯಾವಾಗ ನನ್ನ ಮದುವೆಯನ್ನು ನಿಶ್ಚಯಿಸುತ್ತದೆಯೋ ಆಗ ನಾನು ಅದಕ್ಕೆ ಸಿದ್ಧನಾಗಿರುತ್ತೇನೆ. 
 
ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ ವರುಣ್ ಅರೋನ್ ಮದುವೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅವರು ಸ್ಟೀಲ್ ಸಿಟಿ ಜೇಮ್‌ಶೆಡ್‌ಪುರಕ್ಕೆ ಆಗಮಿಸಿದ್ದರು. 
 

ವೆಬ್ದುನಿಯಾವನ್ನು ಓದಿ