ನಾನು ಸನ್ಯಾಸಿ ನನಗೆ ಪ್ರಶಸ್ತಿ ಬೇಡ: ಬಾಬಾ ರಾಮದೇವ್

ಭಾನುವಾರ, 25 ಜನವರಿ 2015 (11:31 IST)
ಯೋಗಗುರು ರಾಮ್‌ದೇವ್ ಮತ್ತು ರವಿಶಂಕರ್ ಗುರೂಜಿಗೆ 'ಪದ್ಮ' ಪ್ರಶಸ್ತಿ ಬೇಡ ಎಂದು ಹೇಳಿದ್ದಾರೆ.
 
ಗಣರಾಜ್ಯೋತ್ಸವದಂದು ಘೋಷಣೆಯಾಗಲಿರುವ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ರಾಮ್‌ದೇವ್ ಹಾಗೂ ರವಿ ಶಂಕರ್ ಗುರೂಜಿ ಹೆಸರು ಕೂಡ ಇದೆ ಎಂಬ ಸುದ್ದಿ ಪ್ರಕಟವಾಗಿತ್ತು.
 
ಈ ಹಿನ್ನಲೆಯಲ್ಲಿ ಶನಿವಾರ ಇವರಿಬ್ಬರೂ ತಮಗೆ ಪ್ರಶಸ್ತಿ ಬೇಡ ಎಂದು ಹೇಳಿಕೊಂಡಿದ್ದಾರೆ.
 
ಬಾಬಾ ರಾಮ್‌ದೇವ್ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, 'ನಾನೊಬ್ಬ ವಿರಾಗಿಯಾಗಿರುವ ಕಾರಣ ಅಂತಹ ಯಾವುದೇ ಗೌರವ, ಪ್ರಶಸ್ತಿಯನ್ನು ಪಡೆಯಲು ಇಚ್ಛಿಸುವುದಿಲ್ಲ.' ಎಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ