ಯೋಗಗುರು ರಾಮ್ದೇವ್ ಮತ್ತು ರವಿಶಂಕರ್ ಗುರೂಜಿಗೆ 'ಪದ್ಮ' ಪ್ರಶಸ್ತಿ ಬೇಡ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವದಂದು ಘೋಷಣೆಯಾಗಲಿರುವ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ರಾಮ್ದೇವ್ ಹಾಗೂ ರವಿ ಶಂಕರ್ ಗುರೂಜಿ ಹೆಸರು ಕೂಡ ಇದೆ ಎಂಬ ಸುದ್ದಿ ಪ್ರಕಟವಾಗಿತ್ತು.
ಈ ಹಿನ್ನಲೆಯಲ್ಲಿ ಶನಿವಾರ ಇವರಿಬ್ಬರೂ ತಮಗೆ ಪ್ರಶಸ್ತಿ ಬೇಡ ಎಂದು ಹೇಳಿಕೊಂಡಿದ್ದಾರೆ.
ಬಾಬಾ ರಾಮ್ದೇವ್ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, 'ನಾನೊಬ್ಬ ವಿರಾಗಿಯಾಗಿರುವ ಕಾರಣ ಅಂತಹ ಯಾವುದೇ ಗೌರವ, ಪ್ರಶಸ್ತಿಯನ್ನು ಪಡೆಯಲು ಇಚ್ಛಿಸುವುದಿಲ್ಲ.' ಎಂದಿದ್ದಾರೆ.