ತಮ್ಮ ಮನೆಯಲ್ಲಿನ ಸಿಸಿಟಿವಿ ಫೂಟೆಜ್ಗಳನ್ನು ಅನುಮತಿ ಕೇಳದೇ ಕೊಂಡೊಯ್ದ ಸಿಐಡಿ ಪೊಲೀಸರು ಅದರಲ್ಲಿನ ಕೆಲವು ದೃಶ್ಯಾವಳಿಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಆರೋಪಿಸಿದ್ದ ಹನುಮಂತರಾಯಪ್ಪನವರು ಆ ಕುರಿತು ದೂರು ದಾಖಲಿಸಿಲ್ಲ. ಇಡೀ ರಾಜ್ಯವೇ ರವಿಯವರ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿದ್ದರೆ ಹನುಮಂತರಾಯಪ್ಪನವರು ಇಂತಹ ದೊಡ್ಡ ತಪ್ಪು ನಡೆದಿದ್ದರೂ ಸುಮ್ಮನಿದ್ದಾರೆ ಎಂದು ವಿಶ್ವ ಕನ್ನಡ ಸಮಾಜದ ಸ್ಥಾಪಕ ಎಸ್. ಆನಂದ ಆರೋಪಿಸಿದ್ದಾರೆ.