ಕತ್ರ: ಜಿಮ್ನಾಸ್ಟಿಕ್ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ ಪಂದ್ಯಕ್ಕೆ ಪ್ರಪ್ರತಮವಾಗಿ ಆಯ್ಕೆಯಾಗಿರುವ ದೀಪಾ ಕರ್ಮಕರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರು ಇದೇ ರೀತಿ ಸಾಧನೆ ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಪುರುಷರು ಮೀಸಲಾತಿಗಾಗಿ ಪ್ರತಿಭಟನೆ ನಡೆಸುವ ಸಮಯ ಬರುತ್ತದೆ ಎಂದು ಹೇಳಿದರು.
ದಿವಂಗತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ಪರ್ವತ ಮನುಷ್ಯ ಮಂಜಿ ಅವರನ್ನು ಉದಾಹರಣೆಯಾಗಿಸಿ, ಯಶಸ್ಸು ಯಾವಾಗಲು ಸಂಪನ್ಮೂಲದಿಂದ ಬರುವುದಿಲ್ಲ, ಅದಕ್ಕೆ ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮ ಅವಶ್ಯಕ ಎಂದು ಮೋದಿ ತಿಳಿಸಿದ್ದಾರೆ.