ಮೋಹನ್ ನಿವಾಸವಷ್ಟೇ ಅಲ್ಲ, ಮಗ, ಸಂಬಂಧಿಕರು ಮತ್ತು ಅವರ ಜತೆ ಸಂಪರ್ಕ ಹೊಂದಿರುವ 13 ಕಡೆಗಳಲ್ಲಿ ಅಂದರೆ ಚೆನ್ನೈ, ಬೆಂಗಳೂರು ಮತ್ತು ಆಂಧ್ರದ ಚಿತ್ತೂರಿನಲ್ಲಿ ಒಂದೇ ಬಾರಿ ದಾಳಿ ನಡೆಸಲಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚಿಗೆ ಉದ್ಯಮಪತಿಗಳಾದ ಜೆ. ಶೇಖರ್ ರೆಡ್ಡಿ, ಶ್ರೀನಿವಾಸಲು ಮತ್ತು ಪ್ರೇಮ್ ಅವರ ನಿವಾಸದ ಮಲೆ ದಾಳಿ ಮಾಡಿ ಒಟ್ಟು 177ಕೋಟಿ ಚಿನ್ನ, ರದ್ದುಗೊಂಡಿರುವ 500 ಮತ್ತು 1,000 ಮುಖಬೆಲೆಯ ನೋಟುಗಳುಳ್ಳ 96 ಕೋಟಿ ಮತ್ತು 2,000 ರೂಪಾಯಿ ಹೊಸ ನೋಟುಗಳ ಕಂತೆಗಳುಳ್ಳ 34 ಕೋಟಿಯನ್ನು ವಶಕ್ಕೆ ಪಡೆದಿದ್ದರು.
ಗುತ್ತಿಗೆದಾರರಾಗಿರುವ ರೆಡ್ಡಿ ತಮಿಳುನಾಡು ಸರ್ಕಾರಕ್ಕೆ ಬಹಳಷ್ಟು ಕೆಲಸಗಳನ್ನು ಮಾಡಿಕೊಟ್ಟಿದ್ದು, ತಿರುಪತಿ ದೇವಸ್ಥಾನ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ಈ ಉದ್ಯಮಿ ಜತೆ ರಾಮ್ ಮೋಹನ್ ಸಂಪರ್ಕ ಹೊಂದಿರುವುದನ್ನು ಸಾಬೀತುಪಡಿಸುವ ಕೆಲ ದಾಖಲೆಗಳು ಸಿಕ್ಕಿದ್ದವು. ಹೀಗಾಗಿ ರಾಮ್ ಮೋಹನ್ ನಿವಾಸದ ಮೇಲೆ ಇಂದು ದಾಳಿ ನಡೆಸಲಾಗಿದೆ.