ಸುಮಾರು 3,000 ಟನ್ಗಳಷ್ಟಿರುವ ಸಂಪತ್ತಿನ ನೆರವಿನಿಂದ ದೀರ್ಘ ಕಾಲದಿಂದ ದೇಶ ಎದುರಿಸುತ್ತಿರುವ ವಾಣಿಜ್ಯ ಅಸಮತೋಲನವನ್ನು ಸರಿದೂಗಿಸಲು ಮೋದಿ ಸರಕಾರ ಯೋಜನೆ ರೂಪಿಸಿದೆ. ದೇವಸ್ಥಾನಗಳಿಗೆ ತಮ್ಮಲ್ಲಿರುವ ಚಿನ್ನ ಸಂಪತ್ತನ್ನು ಬ್ಯಾಂಕ್ನಲ್ಲಿ ಠೇವಣಿ ಇರಿಸುವಂತೆ ಪ್ರೋತ್ಸಾಹಿಸಲು ಅದಕ್ಕೆ ಬಡ್ಡಿಯನ್ನು ನೀಡಲು ಸರಕಾರ ಚಿಂತಿಸುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ , ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಟ್ರಸ್ಟ್ ಅಧ್ಯಕ್ಷ, ನರೇಂದ್ರ ಮುರಳಿ ರಾಣೆ, "ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಮ್ಮ ಚಿನ್ನವನ್ನು ಠೇವಣಿ ಇಡಲು ನಮ್ಮ ಒಪ್ಪಿಗೆ ಇದೆ. ಇದು ಸುರಕ್ಷಿತ, ಅನುಕೂಲಕರ. ಉತ್ತಮ ಬಡ್ಡಿಯನ್ನು ಕೂಡ ಸಂಪಾದಿಸಬಹುದು", ಎಂದಿದ್ದಾರೆ.