ನಾಲ್ವರು ಉಗ್ರರನ್ನು ಕೊಂದು ಹಾಕಿದ ಸೇನೆ

ಶನಿವಾರ, 27 ಮೇ 2017 (10:07 IST)
ಜಮ್ಮು-ಕಾಶ್ಮೀರ: ಇಂದು ಬೆಳಗ್ಗೆ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

 
ಈ ಮೂಲಕ ಸೇನೆಯ ರಾಮ್ ಪುರ್ ಘಟಕಕ್ಕೆ ನುಗ್ಗಲು ಯತ್ನ ನಡೆಸಿದ್ದ ಈ ದಾಳಿಕೋರರನ್ನು ಯೋಧರು ಮಟ್ಟ ಹಾಕಿದ್ದಾರೆ. ಮುಂಜಾವಿನ ವೇಳೆ ರಾಮ್ ಪುರ ಘಟಕದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಒಳನುಸುಳುಕಾರರ ಸುಳಿವು ಪಡೆದ ಯೋಧರು ದಾಳಿ ನಡೆಸಿದ್ದಾರೆ.

ಇದು ಉರಿ ಸೇನಾ ನೆಲೆಯ ಪಕ್ಕದಲ್ಲೇ ಇರುವ ಘಟಕವಾಗಿದ್ದು, ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಶುಕ್ರವಾರವಷ್ಟೇ ಇಲ್ಲಿ ಪಾಕಿಸ್ತಾನದ ಗಡಿ ಕಾರ್ಯಾಚರಣೆ ಪಡೆಯ ಸೈನಿಕರು ದಾಳಿ ನಡೆಸಿದ್ದವು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ