ಡಿಸೆಂಬರ್ 2014ರಿಂದ ಮರೈಮಲೈನಗರದ ಮಹಿಂದ್ರಾ ಟೆಕ್ ಪಾರ್ಕ್ನಲ್ಲಿರುವ ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಸ್ವಾತಿ ಪ್ರತಿದಿನ 6.45ಕ್ಕೆ ರೈಲನ್ನೇರುತ್ತಿದ್ದರು. ಆಕೆಯನ್ನುಚೂಲೈಮೇಡಿನ ಸೌತ್ ಗಂಗೈಯ್ ಅಮ್ಮನ್ ಕೋಯಿಲ್ ಬೀದಿಯಲ್ಲಿರುವ ಮನೆಯಿಂದ ನಿಲ್ದಾಣದವರೆಗೆ ಆಕೆಯ ತಂದೆ ಸಂತಾನಗೋಪಾಲ ಕೃಷ್ಣನ್ ಬೈಕ್ನಲ್ಲಿ ತಂದು ಬಿಟ್ಟಿದ್ದರು. ಮನೆಗೂ ಮತ್ತು ನಿಲ್ದಾಣಕ್ಕೂ ಒಂದು ಕೀಮಿ ದೂರ ಸಹ ಇಲ್ಲ.
2ನೇ ನಂಬರ್ ಪ್ಲಾಟ್ಫಾರ್ಮ್ನಲ್ಲಿ ಲೇಡಿಸ್ ಬೋಗಿ ಬರುವ ಜಾಗದಲ್ಲಿ ನಿಂತಿದ್ದ ಸ್ವಾತಿಯ ಬಳಿ ಚೆಕ್ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದ ಯುವಕನೊಬ್ಬ ಬಂದಿದ್ದಾನೆ. ಅವರಿಬ್ಬರ ನಡುವೆ ಎರಡು ನಿಮಿಷ ವಾಗ್ವಾದ ನಡೆದಿದ್ದು ಬಳಿಕ ಬಳಿಕ ಆತ ತನ್ನ ಬ್ಯಾಗ್ನಿಂದ ಹರಿತವಾದ ಚಾಕುವನ್ನು ತೆಗೆದು ಆಕೆಯ ಮುಖ ಮತ್ತು ಕುತ್ತಿಗೆಯ ಮೇಲೆ ದಾಳಿ ನಡೆಸಿದ್ದಾನೆ. ಆಕೆ ನೆಲಕ್ಕುರುಳುತ್ತಿದ್ದಂತೆ ಶಾಂತಚಿತ್ತನಾಗಿ ಆತ ಅಲ್ಲಿಂದ ತೆರಳಿದ್ದಾನೆ.