ಡಾ. ಕಲಾಂ ಬದಲಿಗೆ ಪ್ರಧಾನಿ ಮೋದಿಗೆ ಶೃದ್ಧಾಂಜಲಿ ಅರ್ಪಿಸಿದ ಸಿಎಂ ರಮಣ್ ಸಿಂಗ್

ಗುರುವಾರ, 30 ಜುಲೈ 2015 (17:08 IST)
ಚತ್ತೀಸ್‌ಗಢ್: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂಗೆ ಸಂತಾಪ ಸೂಚಿಸುವ ಬದಲು ಪ್ರಧಾನಿ ಮೋದಿಗೆ ಸಂತಾಪ ಸೂಚಿಸಿ ಛತ್ತೀಸ್‌ಗಡ್ ರಮಣ್ ಸಿಂಗ್ ಮಾಡಿಕೊಂಡ ಯಡವಟ್ಟು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಕೋಲಾಹಲವೆಬ್ಬಿಸಿದೆ.
 
ಡಾ.ಕಲಾಂ ಅವರಿಗೆ ಸಂತಾಪ ಸೂಚಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಾವಿಗೆ ಸಂತಾಪ ಸೂಚಿಸುವುದಾಗಿ ಹೇಳಿದ್ದು ವಿಡಿಯೋಗಳಲ್ಲಿ ಹರಿದಾಡುತ್ತಿದೆ.
 
ರಾಮೇಶ್ವರಂನಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯಸಂಸ್ಕಾರ ಇಂದು ನೇರವೇರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ವೆಂಕಯ್ಯ ನಾಯ್ಡು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಶೃದ್ಧಾಂಜಲಿ ಅರ್ಪಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ