ಅಸಹಿಷ್ಣುತೆ: ಅಮೀರ್ ಖಾನ್ ಮುಂಬೈ ನಿವಾಸದ ಮುಂದೆ ಪ್ರತಿಭಟನೆ

ಮಂಗಳವಾರ, 24 ನವೆಂಬರ್ 2015 (18:06 IST)
ಅಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿದ ಬಾಲಿವುಡ್ ನಟ ಅಮೀರ್ ಖಾನ್ ನಿವಾಸದ ಮುಂದೆ ಹಿಂದೂ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
 
ಅಮೀರ್ ಖಾನ್ ವಿರುದ್ಧ ಅಲಾಹಾಬಾದ್‌ನಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದು, ಅವರ ಪೋಸ್ಟರ್‌ಗಳನ್ನು ಹಾಕಿದ್ದಲ್ಲದೇ ಕೂಡಲೇ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
 
ನವದೆಹಲಿಯ ಅಶೋಕ್ ನಗರ ಠಾಣೆಯಲ್ಲಿ ಆಮೀರ್ ವಿರುದ್ಧ ದೂರು ದಾಖಲಾಗಿದೆ. ದೇಶದ ಯಾವ ಭಾಗದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎನ್ನುವ ಬಗ್ಗೆ ವಿವರಗಳಿದ್ದಲ್ಲಿ ಅಮೀರ್ ಖಾನ್ ನೀಡಲಿ. ಸೆಲೆಬ್ರಿಟಿಗಳಾಂತಹವರು ಇಂತಹ ಹೇಳಿಕೆ ನೀಡಬಾರದು ಎಂದು ದೂರಿನಲ್ಲಿ ತಿಳಿಸಲಾಗಿದೆ.
 
 

ವೆಬ್ದುನಿಯಾವನ್ನು ಓದಿ