ಅವರು ತಮ್ಮ ಬ್ಯಾಚ್ನಲ್ಲಿ ಎಲ್ಲರಿಗಿಂತ ಕಿರಿಯರಾಗಿದ್ದು, ಬ್ಯಾಚ್ನ ಎಲ್ಲರೂ ಕಳೆದ ಎರಡು ವರ್ಷಗಳ ಹಿಂದೆಯೇ ಬಡ್ತಿ ಪಡೆದಿದ್ದರು. ಆದರೆ ಡಿಜಿಪಿ ಕೆ. ರಾಮಾನುಜಮ್ ತನಿಖೆಗೆ ಆದೇಶಿಸಿದ್ದರಿಂದ ಅವರ ಬಡ್ತಿ ಮಾತ್ರ ವಿಳಂಬವಾಗಿತ್ತು. ಅವರು ಖಿನ್ನತೆ ಕಾಯಿಲೆಯಿಂದ ನರಳುತ್ತಿದ್ದರು ಎಂದು ಸಹ ವರದಿಗಳಿದ್ದು ಆ ಕುರಿತು ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.