ಜಯಲಲಿತಾ ಪ್ರಕರಣ: ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಡಿಎಂಕೆ ಮೇಲ್ಮನವಿ

ಸೋಮವಾರ, 25 ಮೇ 2015 (16:57 IST)
ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರವರನ್ನು ನಿರಪರಾಧಿ ಎಂದು ಖುಲಾಸೆಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಡಿಎಂಕೆ ಪಕ್ಷ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ ಎಂದು ಪಕ್ಷದ ವರಿಷ್ಠ ಎಮ್ ಕರುಣಾನಿಧಿ ತಿಳಿಸಿದ್ದಾರೆ. 

"ಡಿಎಂಕೆ ಈ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಲು ಹಕ್ಕನ್ನು ಹೊಂದಿದೆ ಎಂದು ಈ ಹಿಂದಿನ ಎರಡು ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು. ಆದ್ದರಿಂದ ಜಯಾರವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತದೆ", ಎಂದು ಭರವಸೆ ನೀಡುತ್ತಿರುವುದಾಗಿ, ಕರುಣಾನಿಧಿ ಹೇಳಿಕೆ ನೀಡಿದ್ದಾರೆ. 
 
'ಕರ್ನಾಟಕ ಸರ್ಕಾರವೂ ಸಹ ಈ ಪ್ರಕರಣ ವಿರುದ್ಧ ಮೇಲ್ಮನವಿ ಸಲ್ಲಿಸಲಿದೆ', ಎಂದು ಕರುಣಾನಿಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 
'ಒಂದು ವೇಳೆ ಕರ್ನಾಟಕ ಸರಕಾರ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದಾದರೆ ಅದು ಸಿದ್ದು ಸರಕಾರಕ್ಕೆ ಕಪ್ಪು ಚುಕ್ಕೆ ಎನಿಸಲಿದೆ ಎಂದು ಪ್ರಕರಣದ ಸರಕಾರಿ ಪರ ವಕೀಲ ಬಿ.ವಿ. ಆಚಾರ್ಯ ಅಭಿಪ್ರಾಯ ಪಟ್ಟಿದ್ದರು', ಎಂದು ಕರುಣಾನಿಧಿ ನೆನಪಿಸಿಕೊಂಡಿದ್ದಾರೆ. 
 
"ಸುಪ್ರೀಂ ಕೋರ್ಟ್ ನಮ್ಮ ಮನವಿಯನ್ನು ಎಂದಿಗೂ ನಿರಾಕರಿಸಿಲ್ಲ ಮತ್ತು ಎಂದಿಗೂ ಮತ್ತು ಈ ಪ್ರಕರಣದ ಮಧ್ಯ ಪ್ರವೇಶಿಸಲು ನಿಮಗೆ ಹಕ್ಕಿಲ್ಲ", ಎಂದು ಹೇಳಿಲ್ಲ ಎಂದು ಡಿಎಂಕೆ ಪರ ವಕೀಲ ಶರವಣನ್ ಹೇಳಿದ್ದಾರೆ.
 
ಮೇಲ್ಮನವಿ ಅರ್ಜಿ ಸಲ್ಲಿಸಲು ಡಿಎಂಕೆ ದಿನಾಂಕ ಮತ್ತು ಸಮಯವನ್ನು ನಿಗದಿಗೊಳಿಸಿಲ್ಲ. ಯಾವುದೇ ಕ್ಷಣದಲ್ಲಿ ಸಹ ಅದು ಮೇಲ್ಮನವಿ ಸಲ್ಲಿಸಬಹುದು. ಈ ದಿಶೆಯಲ್ಲಿ ಕರ್ನಾಟಕ ಸರ್ಕಾರ ಮೊದಲ ಹೆಜ್ಜೆಯನ್ನಿಡುವ ಬಗ್ಗೆ ಡಿಎಂಕೆ ನಂಬಿಕೆ ಹೊಂದಿದೆ, ಎಂದು ಪಕ್ಷದ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ