ಜಮ್ಮುವಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮುಫ್ತಿ, ಹೊಸ ಸರಕಾರ ರಚನೆಗೆ ಮುನ್ನ ಹೊಸ ವಾತಾವರಣ ಸೃಷ್ಟಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ., ನಮ್ಮ ಉದ್ದೇಶವನ್ನು ಬ್ಲಾಕ್ಮೇಲ್ ಎಂದು ಪರಿಗಣಿಸಬಾರದು ಎಂದು ಕೋರಿದರು.
ಗಾಳಿಯಲ್ಲಿ ಸರಕಾರ ರಚನೆ ಮಾಡಲು ಸಾಧ್ಯವಾಗದು. ಒಂದು ವೇಳೆ, ಹೊಸ ಸರಕಾರ ರಚನೆಯಾದಲ್ಲಿ ಜನತೆಯ ಏಳಿಗೆಗಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅದಕ್ಕೆ ಕೇಂದ್ರ ಸರಕಾರದ ಸಹಕಾರ ಅಗತ್ಯವಾಗುತ್ತದೆ. ಆದರೆ, ಒಂದು ವೇಳೆ ಕೇಂದ್ರ ಸರಕಾರ ಸಹಕಾರ ನೀಡಿದಲ್ಲಿ ಉತ್ತಮವಾಗಿರುತ್ತದೆ. ನೀಡದಿದ್ದಲ್ಲಿ ಮತ್ತೆ ಹಿಂದಿನ ಕಾಲಕ್ಕೆ ಮರಳಬೇಕಾಗುತ್ತದೆ ಎಂದರು.