ಬಿಜೆಪಿಗೆ ವಿಷಯಾಧಾರಿತ ಬೆಂಬಲ : ಜಗನ್ ಮೋಹನ್ ರೆಡ್ಡಿ

ಸೋಮವಾರ, 19 ಮೇ 2014 (20:16 IST)
ತಮ್ಮ ಪಕ್ಷವು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲ ನೀಡುವುದಾಗಿ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.ಕೆಲವು ಹಿರಿಯ ಮುಖಂಡರ ಜತೆಗೂಡಿದ ಅವರು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಂಧ್ರಪ್ರದೇಶಕ್ಕೆ ನಿಮ್ಮ ಅಗತ್ಯವಿದೆ ಎಂದು ತಿಳಿಸಿದರು.

ಲೋಕಸಭೆಯಲ್ಲಿ 9 ಸ್ಥಾನಗಳನ್ನು ಗೆದ್ದ ಅವರ ಪಕ್ಷ ಎನ್‌ಡಿಎಗೆ ಸೇರುತ್ತಿರುವುದೇಕೆಂಬ ಪ್ರಶ್ನೆಗೆ,  ಬಿಜೆಪಿಗೆ ಯಾವುದೇ ರಾಜಕೀಯ ಪಕ್ಷದ ಬೆಂಬಲದ ಅಗತ್ಯವಿಲ್ಲ. ಅವರಿಗೆ ಈಗಾಗಲೇ 282 ಎಂಪಿಗಳ ಬೆಂಬಲವಿದ್ದು, ನಮ್ಮ ಬೆಂಬಲವೇನೂ ಬೇಕಿಲ್ಲ.

ಆದರೆ ಆಂಧ್ರಪ್ರದೇಶಕ್ಕೆ ಮೋದಿಯ ಅಗತ್ಯವಿದೆ ಎಂದು ರೆಡ್ಡಿ ಹೇಳಿದರು. ಸೀಮಾಂಧ್ರದಲ್ಲಿ ಹೊಸ ರಾಜಧಾನಿ ಸ್ಥಾಪನೆಗೆ ಆರ್ಥಿಕ ನೆರವನ್ನು ಉದಾರವಾಗಿ ನೀಡುವಂತೆ ಅವರು ನಿಯೋಜಿತ ಪ್ರಧಾನಿಗೆ ಮನವಿ ಮಾಡಿಕೊಂಡರು.
 

ವೆಬ್ದುನಿಯಾವನ್ನು ಓದಿ