ಸುಗ್ರಿವಾಜ್ಞೆಯನ್ನು ನಂಬದ ತಮಿಳಗರು ಶಾಶ್ವತ ಕಾಯಿದೆಗೆ ಆಗ್ರಹಿಸಿದ್ದಾರೆ. ತಾತ್ಕಾಲಿಕ ಕ್ರಮದಿಂದ ಸಂತ್ರಪ್ತರಾಗದ ತಮಿಳಗರು ಮೂರು ವರ್ಷದ ನಿಷೇಧದ ಬಳಿಕ ಇದೇ ಪ್ರಥಮ ಬಾರಿಗೆ ಆಯೋಜನೆಯಾಗಿದ್ದ ಜಲ್ಲಿಕಟ್ಟು ಪ್ರದರ್ಶನವನ್ನು ತಡೆದಿದ್ದಾರೆ. ಮಧುರೈನಲ್ಲಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಂದ ಮಧುರೈನ ಆಳಂಗನಲ್ಲೂರಿನಲ್ಲಿ ಉದ್ಘಾಟನೆಯಾಗಲಿದ್ದ ಜಲ್ಲಿಕಟ್ಟನ್ನು ರದ್ದುಗೊಳಿಸಲಾಗಿದ್ದು ಸಿಎಂಗೆ ಭಾರಿ ಮುಖಭಂಗವಾಗಿದೆ.
ಪ್ರತಿಭಟನೆಯ ನಡುವೆಯೂ ರಾಜ್ಯದ ಹಲವೆಡೆ ಜಲ್ಲಿಕಟ್ಟು ಆರಂಭವಾಗಿದೆ. ತಿರುಚ್ಚಿಯ ಮಣಪ್ಪಾರೈನ ಪುದುಪಟ್ಟಿಯಲ್ಲಿ ಜಲ್ಲಿಕಟ್ಟನ್ನು ಆಯೋಜಿಸಲಾಗಿದ್ದು, 140ಕ್ಕೂ ಹೆಚ್ಚು ಗೂಳಿಗಳು ಭಾಗವಹಿಸಿವೆ. ಯಾವುದೇ ಸಚಿವರು, ರಾಜಕಾರಣಿಗಳಿಗೆ ಇಲ್ಲಿ ಆಮಂತ್ರಣ ನೀಡಲಾಗಿಲ್ಲ.