ಉತ್ತರ ಕಾಶ್ಮಿರದ ಲಾನ್ಗೇಟ್ ವಿಧಾನಸಭೆ ಕ್ಷೇತ್ರದ ಶಾಸಕರಾದ ಶೇಕ್ ಅಬ್ದುಲ್ ರಷೀದ್, 1993ರ ಮುಂಬೈ ಸ್ಫೋಟದ ಆರೋಪಿ ಮೆಮನ್ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೆ, ರಾಜೀವ್ ಗಾಂಧಿ, ಬಿಯಾಂತ್ ಸಿಂಗ್ ಹಂತಕರಿಗೆ ಯಾಕೆ ಗಲ್ಲು ಶಿಕ್ಷೆಯಾಗಿಲ್ಲ. ನಾವು ಅವರನ್ನು ಗಲ್ಲಿಗೇರಿಸುವಂತೆ ಒತ್ತಾಯ ಮಾಡುತ್ತಿಲ್ಲ. ಕಾಶ್ಮಿರದ ಜನತೆ ಗಲ್ಲಿಗೇರಿಸುವುದನ್ನು ವಿರೋಧಿಸುತ್ತಾರೆ. ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರು ಮೃತ ದೇಹವನ್ನು ಕೂಡಾ ಕುಟುಂಬದ ಸದಸ್ಯರಿಗೆ ಯಾಕೆ ಒಪ್ಪಿಸಿಲ್ಲ ಎನ್ನುವುದಕ್ಕೆ ಉತ್ತರ ನೀಡಿ ಎಂದು ಶಾಸಕ ರಷೀದ್ ಒತ್ತಾಯಿಸಿದ್ದಾರೆ.