ಗೋವಿಂದ್ ತ್ರಿವೇದಿ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಒಂಟೆಯ ಕೆರ್ ಟೇಕರ್ ಫೂಲಾ ಮೆನಾನನ್ನು ಭೇಟಿಯಾಗಲು ಬಂದಿದ್ದ ಆತನ ಸ್ನೇಹಿತ ಗೋವಿಂದ್ ತ್ರಿವೇದಿ ಸುಮ್ಮನೆ ಮಲಗಿದ್ದ ಒಂಟೆಯನ್ನು ಸುಖಾಸುಮ್ಮನೆ ಕೆಣಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಒಂಟೆ ಆತನ ತಲೆಗೆ ಬಲವಾಗಿ ಕಚ್ಚಿದೆ. ಆತನ ಕಿರುಚಾಟವನ್ನು ಕೇಳಿದ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಬಂದು ಆತನನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಒಂಟೆ ಹಿಡಿತವನ್ನು ಸಡಲಿಸಲಿಲ್ಲ. ಪರಿಣಾಮ ಆತ ಅಸುನೀಗಿದ್ದಾನೆ. ಸ್ನೇಹಿತನನ್ನು ಉಳಿಸಲು ಪ್ರಯತ್ನಿಸಿದ ಫೂಲಾ ಮೆನಾ ಕಾಲಿಗೂ ಸಹ ಒಂಟೆ ಬಲವಾಗಿ ಕಚ್ಚಿದೆ.