ಒಂದು ಶಿಲ್ಪಕಲಾಕೃತಿ ರಚಿಸಿ ಕೊಡುವಂತೆ ನಟರಾಜನ್ ಹುಸ್ಸೇನಿ ಅವರಲ್ಲಿ ಕೇಳಿದ್ದರು. ಶ್ರೀಲಂಕಾ ಯುದ್ಧದ ತಮಿಳು ಸಂತ್ರಸ್ತರಿಗೆ ತಂಜಾವೂರಿನಲ್ಲಿ ಸ್ಮಾರಕ ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ಕಲಾಕೃತಿಗೆ 98 ಲಕ್ಷ ರೂಪಾಯಿಯನ್ನು ನೀಡಲು ಒಪ್ಪಿಕೊಂಡಿದ್ದ ನಟರಾಜನ್ ಕೇವಲ 25 ಲಕ್ಷ ರೂಪಾಯಿಗಳನ್ನು ಮಾತ್ರ ಪಾವತಿ ಮಾಡಿದ್ದರು ಎಂದು ಹುಸ್ಸೇನಿ ಹೇಳುತ್ತಾರೆ.