ಜಾರ್ಖಂಡ್ ವೀರರ ಜನ್ಮಭೂಮಿಯಾಗಿದೆ: ನರೇಂದ್ರ ಮೋದಿ

ಶುಕ್ರವಾರ, 21 ನವೆಂಬರ್ 2014 (13:03 IST)
ಡೋಲ್ಟೋಗಂಜ್‌ನಲ್ಲಿ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಮೋದಿ ಕಳೆದ ಚುನಾವಣೆಯಲ್ಲಿ ಜಾರ್ಖಂಡ್ ಜನತೆ ಭಾರಿ ಬೆಂಬಲ ನೀಡಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಅದೇ ರೀತಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದರು.
 
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬಹುಮತದಿಂದ ಆರಿಸಿ ತಂದಲ್ಲಿ ರಾಜ್ಯದ ಸಂಪೂರ್ಣ ಅಭಿವೃದ್ಧಿ ಪಥದತ್ತ ಸಾಗಿಸಲಾಗುವುದು. ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ್ದೀರಿ. ನನ್ನ ಮೇಲೆ ವಿಶ್ವಾಸವಿಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
 
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆಯಿಂದ ಕೂಡಿದೆ. ಒಂದೇ ಪಕ್ಷಕ್ಕೆ ಬಹುಮತ ನೀಡಿದಲ್ಲಿ ಅಭಿವೃದ್ಧಿ ಸಾಧ್ಯ ಎಂದರು.


ರಾಜ್ಯವನ್ನು ಕುಟುಂಬ ರಾಜಕಾರಣದಿಂದ ಮುಕ್ತಗೊಳಿಸಿ, ರಾಜ್ಯದ ಸಣ್ಣ ಸಣ್ಣ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಜಾರ್ಖಂಡ್‌ನ ಭೂಮಿ ಸಂಪತ್ಭರಿತವಾಗಿದೆ. ಆದರೆ, ಜಾರ್ಖಂಡ್ ಜನತೆ ಬಡವರಾಗಿದ್ದಾರೆ. ಬಡವರು , ಯುವಕರಿಗೆ ಒಳಿತಾಗಬೇಕು
 
ನಾಚಟಿಕೆ ಬಿಟ್ಟು ಜಾರ್ಖಂಡ್ ರಾಜ್ಯವನ್ನು ಲೂಟಿ ಮಾಡಲಾಗಿದೆ. ರಾಜ್ಯವನ್ನು ಕುಟುಂಬ ರಾಜಕೀಯದಿಂದ ಮುಕ್ತಗೊಳಿಸಿದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ