ಮಾಜಿ ರಾಷ್ಟ್ರಪತಿ, ಮಹಾನ್ ವಿಜ್ಞಾನಿ, ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ 8.15ಕ್ಕೆ ನದೆಹಲಿಯ ನಿವಾಸದಿಂದ ಅವರ ಜನ್ಮಸ್ಥಳವಾದ ರಾಮೇಶ್ವರಂದತ್ತ ರವಾನಿಸಲಾಯಿತು.
ಕಲಾಂ ಅಂತ್ಯ ಸಂಸ್ಕಾರಕ್ಕೆ ತಂಗಚಿಮದಮ್ ಪಂಚಾಯತ್ ವ್ಯಾಪ್ತಿಯ ಪೆಯಿಕರಂಬು ಗ್ರಾಮದಲ್ಲಿ ಭೂಮಿಯನ್ನು ತಮಿಳುನಾಡು ಸರ್ಕಾರ ಮಂಜೂರು ಮಾಡಿದೆ. ಆ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಕಲಾಂ ಕುಟುಂಬ ಒಪ್ಪಿದ್ದು, ಆ ಜಾಗವನ್ನು ಮಟ್ಟ ಮಾಡುವ ಕಾರ್ಯ ಭರದಿಂದ ಸಾಗಿದೆ.