ಮಂಗಳೂರು: ಕನ್ನಡ ಉಪನ್ಯಾಸಕನಿಂದ ಲೈಂಗಿಕ ಶೋಷಣೆ

ಮಂಗಳವಾರ, 22 ಜುಲೈ 2014 (12:02 IST)
ನಗರದ ವಾಮಂಜೂರಿನ ಪ್ರತಿಷ್ಠಿತ  ಖಾಸಗಿ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕರೊಬ್ಬರು ಪಿಯು ವಿದ್ಯಾರ್ಥಿನಿಯೊಬ್ಬಳಿಗೆ ಕಳೆದ 1 ವರ್ಷದಿಂದ ಲೈಂಗಿಕ ಶೋಷಣೆ ಮಾಡುತ್ತಿದ್ದ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ.


 
ಆರೋಪಿಯನ್ನು  ಹರೀಶ್ ಆಚಾರ್ಯ ಎಂದು ಗುರುತಿಸಲಾಗಿದೆ. 
 
ತನ್ನ ಉಪನ್ಯಾಸಕನಿಂದ ತನ್ನ ಮೊಬೈಲ್‌ಗೆ ಅಶ್ಲೀಲ ಸಂದೇಶಗಳು ಬರುತ್ತಿದ್ದವು.  ನಾನು ಒಬ್ಬಳೇ ಇದ್ದಾಗ ಅವರು ನನ್ನನ್ನು ಸ್ಪರ್ಶಿಸಲು ಹವಣಿಸುತ್ತಿದ್ದರು ಮತ್ತು ತರಗತಿ ಮುಗಿದ ಮೇಲೆ ಕೂಡ ಕಾಲೇಜಿನಲ್ಲಿ ಇರುವಂತೆ ಅವರು ಒತ್ತಾಯಿಸುತ್ತಿದ್ದರು ಎಂದು ನೊಂದ ಬಾಲಕಿ ಆಪಾದನೆ ಮಾಡಿದ್ದಾಳೆ. 
 
ಆತನ ಕಿರುಕುಳದಿಂದ ಬೇಸತ್ತ ಯುವತಿ ಜುಲೈ 21 ರಂದು ಆತ್ಮಹತ್ಯೆ ಮಾಡಲು ಪ್ರಯತ್ನಿಸಿದಾಗ ಆಕೆಯ ಸಮಸ್ಯೆಯ ಅರಿವಾಗಿದೆ. 
 
ಕಂಕನಾಡಿ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ