ಇನ್ವೆಸ್ಟ್ ಕರ್ನಾಟಕ-2016 ಗ್ಲೋಬಲ್ ಇನ್ವೆಸ್ಟರ್ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೇಟ್ಲಿ, ವಿದ್ಯಾವಂತ ಯುವಕರ ಸಮೂಹ ಮತ್ತು ನೈಸರ್ಗಿಕ ತಂತ್ರಜ್ಞಾನಗಳಿಂದಾಗಿ ದೇಶದ ಜಿಡಿಪಿಗಿಂತ ಕರ್ನಾಟಕ ಜಿಡಿಪಿಯಲ್ಲಿ ಹೆಚ್ಚಳ ಕಾಣಬಹುದಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ನಿತೀನ್ ಗಡ್ಕರಿ, ವೆಂಕಯ್ಯನಾಯ್ಡು ಮತ್ತು ಅನಂತ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.