ಕಾಸರಗೋಡು ಉತ್ತರ ಜಿಲ್ಲೆಯ ಹೊಸದುರ್ಗ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ನಡೆಸುತ್ತಿದ್ದ ಬಾಲಕ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ , ಆತನ ಇಬ್ಬರು ಸಹಪಾಠಿಗಳ ಜತೆ ಪ್ರೇಮ ಪ್ರಕರಣವೊಂದರ ಸಂಬಂಧ ಜಗಳ ನಡೆದಿದೆ ಎನ್ನಲಾಗಿದೆ. ಜಗಳ ತೀವೃತೆಗೆ ತೆರಳಿ ಆತನ ಕಣ್ಣಿಗೆ ಕೈವಾರದಿಂದ ಚುಚ್ಚಿದ ಸ್ನೇಹಿತರು, ಕಣ್ಣಿಗೆ ಗಂಭೀರ ಗಾಯವಾದಾಗ ಅದನ್ನು ತೊಳೆಯುವ ನೆಪದಿಂದ ಕೆರೆಯ ಬಳಿ ಆತನನ್ನು ಕೊಂಡೊಯ್ದಿದ್ದಾರೆ ಮತ್ತು ನೀರಲ್ಲಿ ಮುಳುಗಿಸಿ ಆತನನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ.