ಕೇರಳ ಗವರ್ನರ್ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡಿದ್ದೇನೆ: ಶೀಲಾ ದೀಕ್ಷಿತ್

ಮಂಗಳವಾರ, 26 ಆಗಸ್ಟ್ 2014 (16:46 IST)
ಕೇರಳ ಗವರ್ನರ್ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡಿದ್ದೇನೆಯೇ ಹೊರತು ಯಾರ ಒತ್ತಡದಿಂದ ರಾಜೀನಾಮೆ ನೀಡಿಲ್ಲ ಎಂದು ಕೇರಳ ಗವರ್ನರ್ ಶೀಲಾ ದೀಕ್ಷಿತ್ ಹೇಳಿದ್ದಾರೆ.
 
ನನ್ನ ರಾಜೀನಾಮೆ ಅಂಗೀಕಾರವಾದ ನಂತರ ಸತ್ಯ ಸಂಗತಿಯನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
 
ರಾಜೀನಾಮೆ ನೀಡಲು ನಿರಾಕರಿಸಿದ ರಾಜ್ಯಪಾಲರನ್ನು ಎತ್ತಂಗಡಿ ಬೆದರಿಕೆ ಒಡ್ಡಿರುವ ನರೇಂದ್ರ ಮೋದಿ ನೇತೃತ್ವದ ಸರಕಾರದ ನಿರ್ಧಾರಗಳಿಂದ ರಾಜ್ಯಪಾಲರಿಗೆ ಬೇಸರ ತರಿಸಿದೆ.
 
ನಿನ್ನೆಯಷ್ಟೆ ಮಹಾರಾಷ್ಟ್ರ ರಾಜ್ಯಪಾಲರ ಶಂಕರ್‌ನಾರಾಯಣ್ ಅವರು ತಮಗೆ ಮಿಜೋರಾಂ ರಾಜ್ಯಕ್ಕೆ ವರ್ಗಾಯಿಸಿರುವುದನ್ನು ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
  

ವೆಬ್ದುನಿಯಾವನ್ನು ಓದಿ