ಸಿಕ್ಕರೆ ಒಂದರ ಹಿಂದೆ ಒಂದು ಸಿಗುತ್ತದೆ, ಕಳೆದುಕೊಂಡರೆ ಕೂಡ ಒಂದರ ಹಿಂದೆ ಒಂದನ್ನು ಕಳೆದುಕೊಳ್ಳುತ್ತೇವೆ ಎನ್ನುತ್ತಾರೆ. ಈ ವ್ಯಕ್ತಿಯ ಜೀವನದಲ್ಲಂತೂ ಇದು ಸತ್ಯವೆನಿಸಿದೆ. ಒಂದರ ಹಿಂದೆ ಒಂದು ಅದೃಷ್ಟ ಅವನದಾಗಿದೆ. ಸಾವನ್ನು ಗೆದ್ದ ಸಂತೋಷದಲ್ಲಿ ಮನೆಗೆ ಹಿಂತಿರುಗುತ್ತಿದ್ದಂತೆ ಆತ ಕೋಟ್ಯಾಧೀಶನೂ ಆಗಿದ್ದಾನೆ.
ಮೊನ್ನೆ ತಾನೇ ನಡೆದ ಎಮಿರೈಟ್ಸ್ ವಿಮಾನ ದುರಂತದಲ್ಲಿ 300 ಪ್ರಯಾಣಿಕರು ಪವಾಡಸದೃಶವಾಗಿ ಬದುಕುಳಿದಿದ್ದು ನಿಮಗೆ ಗೊತ್ತಿರಲಿಕ್ಕೆ ಸಾಕು. ಆ ಶಾಕ್ನಿಂದಲೇ ಹೊರ ಬಂದ, ಅದೇ ವಿಮಾನದಲ್ಲಿದ್ದ, ವಿಮಾನ ಸಂಸ್ಥೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ಮಹಮ್ಮದ್ ಬಷೀರ್ ಅಬ್ದುಲ್ ಖಾದರ್ಗೆ ಮತ್ತೊಮ್ಮೆ ಅದೃಷ್ಟ ಖುಲಾಯಿಸಿದೆ.
ಅವರ ಮಗ ಹುಟ್ಟಿದ 13 ದಿನಕ್ಕೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಪಾರ್ಶ್ವವಾಯುಗೆ ತುತ್ತಾಗಿದ್ದಾನೆ. ಈಗ 21 ವರ್ಷದವನಾಗಿರುವ ಆತನ ಚಿಕಿತ್ಸೆಗೆ ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡಿರುವ ಬಷೀರ್ ಕಳೆದ 37 ವರ್ಷಗಳಿಂದ ದುಬಾಯಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕೆಲಸದಿಂದ ನಿವೃತ್ತರಾಗಲಿದ್ದು ಈ ಲಾಟರಿ ಹಣದಿಂದ ಮುಂದಿನ ಜೀವನ ನಡೆಸುವ ಖುಷಿಯಲ್ಲಿದ್ದಾರೆ.