ಟಿವಿ ಲೈವ್‌ ಶೋದಲ್ಲಿ ಸಚಿವನ ಮೇಲೆ ಕಲ್ಲು ತೂರಾಟ

ಶುಕ್ರವಾರ, 29 ಏಪ್ರಿಲ್ 2016 (10:09 IST)
ಕೇರಳದ ಕಾರ್ಮಿಕ ಸಚಿವ ಶಿಬು ಬೇಬಿ ಜಾನ್ ಮತ್ತು ಅವರ ಎದುರಾಳಿ ಎಡರಂಗದ ಎನ್. ವಿಜಯನ್ ಪಿಳ್ಳೈ ಅವರು ಸುದ್ದಿ ವಾಹಿನಿಯೊಂದರಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಚರ್ಚೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಘಟನೆಯಿಂದ ಕೆಲಕಾಲ ಚಾನೆಲ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

 
ವರದಿಗಳ ಪ್ರಕಾರ ಉದ್ರಿಕ್ತ ಗುಂಪು ನಾಯಕರಿಬ್ಬರ ಮೇಲೆ ಕುರ್ಚಿ ಮತ್ತು ಕಲ್ಲಿನಿಂದ ದಾಳಿ ಮಾಡಿದ್ದು ಅವರಿಬ್ಬರು ಸಹ ಗಾಯಗೊಂಡಿದ್ದಾರೆ. 
 
ಜಾನ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅವರು ಮೂವರು ಅಭ್ಯರ್ಥಿಗಳ ನಡುವೆ ಲೈವ್ ಚರ್ಚೆ ಆರಂಭವಾಗುತ್ತಿದ್ದಂತೆ ದಾಳಿ ನಡೆದಿದೆ ಎಂದಿದ್ದಾರೆ. 
 
ಎಡ ಪ್ರಜಾಸತ್ತಾತ್ಮಕ ರಂಗದ ಪಿಳ್ಳೈ ಅವರ ಮೇಲೆ ಕುರ್ಚಿಯಿಂದ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಕಾಲಿಗೆ ಗಾಯವಾಗಿದೆ. ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಜಾನ್ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ಅವರು ಈ ಹಿಂದೆ ಎರಡು ಬಾರಿ ಗೆಲುವು ಸಾಧಿಸಿರುವ ಚವರ ವಿಧಾನಸಭಾ ಕ್ಷೇತ್ರದ ಸ್ಪರ್ಧಿಸುತ್ತಿದ್ದಾರೆ. ಅವರಿಗಿಂತಲೂ ಮೊದಲು ಜಾನ್ ಅವರ ತಂದೆ ಬೇಬಿ ಜಾನ್ ಚವರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರು ಟ್ರೇ ಯೂನಿಯನ್ ನಾಯಕರು ಮತ್ತು ಸಚಿವರು ಸಹ ಆಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ