ಯುವಕನ ಮದುವೆ ಮರಠ ನಿವಾಸಿಯಾದ ಒಬ್ಬ ಯುವತಿ ಜೊತೆಗೆ ಆಗಿತ್ತು. ಮದುವೆಯ ನಂತರ ಇವರಿಬ್ಬರ ಸಂಬಂಧ ಅಷ್ಟೊಂದು ಸರಿ ಇರಲಿಲ್ಲ. ಇಬ್ಬರ ನಡುವೆ ಕಲಹ ಕೂಡ ಆಗುತ್ತಿತ್ತು. ಮಹಿಳೆಗೆ ತನ್ನದೇ ಗ್ರಾಮದ ಮದುವೆಯಾದ ವ್ಯಕ್ತಿಯ ಜೊತೆಗೆ ಪ್ರೇಮವಾಗಿತ್ತು. ನಂತರ ಇಬ್ಬರೂ ಕೂಡಿಕೊಂಡು ಗ್ರಾಮವನ್ನು ಬಿಟ್ಟು ಓಡಿ ಹೋಗಿದ್ದಾರೆ. ಯುವಕ ಪೋಲಿಸರಿಗೆ ದೂರು ನೀಡಲು ಹೋದಾಗ ಪೋಲಿಸರು ಈತನ ಮಾತಿಗೆ ಕಿವಿಗೊಡದ ಕಾರಣ, ಆತ ಪಂಚಾಯಿತಿಯ ಮೊರೆ ಹೋಗಿದ್ದಾನೆ.
ವಿಚಾರನೆ ನಡೆಸಿದ ಪಂಚಾಯಿತಿ, ಓಡಿಹೋದ ವ್ಯಕ್ತಿಯ ಪತ್ನಿಯನ್ನು ತನ್ನ ಬಳಿ ಇಟ್ಟುಕೊಳ್ಳವಂತೆ ಯುವಕನಿಗೆ ತಿಳಿಸಿದೆ. ನಿನ್ನ ಪತ್ನಿಗೆ ಓಡಿ ಹೋದ ಯುವಕನ ಜೊತೆಗೆ ಇರಲು ಬಿಡು ಎಂದು ಕೂಡ ಹೇಳಿದೆ. ಇಷ್ಟೆ ಅಲ್ಲ ಯುವಕನಿಗೆ 10 ಸಾವಿರ ರೂಪಾಯಿ ನೀಡುವ ಪ್ರಸ್ಥಾವ ಕೂಡ ಮಾಡಿದೆ. ಇದರ ನಂತರ ಜಿಲ್ಲಾ ಆಡಳಿತ ಪಂಚಾಯಿತಿಯಲ್ಲು ಆದೇಶ ಹೋರಡಿಸಿದ ಪಂಚರ ವಿರುದ್ದ ಕ್ರಮಕೈಗೊಳ್ಳಲು ಆದೇಶ ಹೊರಡಿಸಿದೆ.