ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಂದ ಬಿಜೆಪಿ ನಾಯಕರ ವಿರುದ್ಧ ಟೀಕೆ ಮತ್ತು ಹೊಗಳಿಕೆ ಎರಡೂ ಬಹಳ ಸುಲಭವಾಗಿ ಹೊರಬರುತ್ತವೆ ಎನ್ನಿಸುತ್ತದೆ. ಈ ಹಿಂದೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಹೊಗಳಿದ್ದ ಅವರು ಈಗ ರೈಲು ಮಂತ್ರಿ ಸುರೇಶ್ ಪ್ರಭು ಅವರನ್ನು ಮನಸಾರೆ ಕೊಂಡಾಡಿದ್ದಾರೆ.
ಆಗ್ಗಾಗ್ಗೆ ಬಿಜೆಪಿಯನ್ನು ಟೀಕಿಸಲು ಬಳಸುತ್ತಿದ್ದ ಟ್ವಿಟ್ಟರ್ನಲ್ಲಿಯೇ ಅವರು ಈ ಬಾರಿ ಬಿಜೆಪಿಯನ್ನು ಹೊಗಳಿದ್ದಾರೆ. ನಾನು ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ಅಭಿನಂದನೆಗಳನ್ನು ಹೇಳಬಯಸುತ್ತೇನೆ. ಅವರು ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭೀಕರ ಬರಗಾಲವನ್ನು ಎದುರಿಸುತ್ತಿರುವ ಲಾತೂರ್ ಜಿಲ್ಲೆಗೆ 3 ಕೋಟಿ, 20 ಲಕ್ಷ ಲೀಟರ್ ನೀರು ಪೂರೈಸಲು ರೈಲು ಸಚಿವರು ಮಾಡಿದ ಪ್ರಯತ್ನವನ್ನು ಅವರು ಹೊಗಳುತ್ತಿದ್ದರು.
ಈ ಹಿಂದೆ ಗಡ್ಕರಿಯವರನ್ನು ಭೇಟಿ ಮಾಡಿದ್ದ ಅವರು, 'ಇದು ಗ್ರೆಟ್ ಮಿಟಿಂಗ್ ಸರ್, ಅನೇಕ ವಿಧದಲ್ಲಿ ನಮಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು', ಎಂದು ಟ್ವೀಟ್ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.