ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನಕ್ಕೆ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಾಮ ನಿರ್ದೇಶನಗೊಂಡಿದ್ದಾರೆ. ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಈ ಮೂವರನ್ನು ಸ್ವಚ್ಛ ಭಾರತ ಅಭಿಯಾನದ ಭಾಗವಾಗುವಂತೆ ಆಹ್ವಾನಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಕೊಹ್ಲಿ, ಶರ್ಮಾ ಸೇರಿದಂತೆ ಬಿಲಿಯರ್ಡ್ ಆಟಗಾರ ಪಂಕಜ್ ಅಡ್ವಾಣಿ, ಟೆನಿಸ್ ತಾರೆ ಮಹೇಶ್ ಭೂಪತಿ, ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್, ಒರಿಯಾ ನಟರಾದ ಅಪರಾಜಿತ ಮೊಹಂತಿ ಮತ್ತು ಸಿದ್ಧಾಂತ ಮೊಹಾಪಾತ್ರಾ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಐಐಟಿ ತರಬೇತಿ ಕೇಂದ್ರ ಸೂಪರ್ 30 ಸ್ಥಾಪಕ, ಸಮಾಜ ಸುಧಾರಕ ಬಿಹಾರ ಕುನಾಲ್ ಕಿಶೋರ್ ಆನಂದ್ ಕುಮಾರ್ ಅವರನ್ನು ಪ್ರಧಾನ ನಾಮಕರಣ ಮಾಡಿದ್ದಾರೆ.