ಕಾಂಗ್ರೆಸ್ ಪಕ್ಷದ ನಾಯಕರು ನಿಜವಾದ ಲೂಟಿಕೋರರು ಎಂದು ಮಾಜಿ ಐಪಿಎಲ್ ಆಯುಕ್ತ ಲಲಿತ್ ಮೋದಿ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ, ಪಕ್ಷದ ಹಿರಿಯ ನಾಯಕರಾದ ರಾಜೀವ್ ಶುಕ್ಲಾ, ಕಮಲ್ನಾಥ್ ಮತ್ತು ಪಿ.ಚಿದಂಬರಂ ಪುತ್ರ ಕಾರ್ತಿಕ್ ಕೂಡಾ ಮಹಾನ್ ಭ್ರಷ್ಟರು ಎಂದು ಟ್ವೀಟ್ ಮಾಡಿದ್ದಾರೆ.
ನನ್ನ ಜೀವಕ್ಕೆ ಬೆದರಿಕೆಯಿದ್ದಾಗಲೂ ಉದ್ದೇಶಪೂರ್ವಕವಾಗಿ ನನಗೆ ನೀಡಿದ್ದ ಭಧ್ರತೆಯನ್ನು ಹಿಂಪಡೆದಿದ್ದರು. ರಾಜೀವ್ ಶುಕ್ಲಾ ಅವರೊಂದಿಗೆ ನಿನ್ನೆ ಸುಮಾರು 53 ಸೆಕೆಂಡ್ಗಳ ಕಾಲ ಮಾತನಾಡಿದ್ದಾಗಿ ಲಲಿತ್ ಮೋದಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರ ವಿರುದ್ಧ ಕೋರ್ಟ್ನಲ್ಲಿ ಪ್ರಕರಣ ದಾಖಲಿಸುವುದಾಗಿ ಲಲಿತ್ ಮೋದಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ 2011ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಐಪಿಎಲ್ ಬೆಟ್ಟಿಂಗ್ನಲ್ಲಿ ಭಾಗಿಯಾಗಿರಲಿಲ್ಲ. ಪ್ರಧಾನಿ ಅತ್ಯಂತ ಪ್ರಾಮಾಣಿಕ ನಾಯಕ ಎಂದು ಲಲಿತ್ ಮೋದಿ ಎಂದು ಟ್ವೀಟ್ ಸರಣಿಗಳ ಮೂಲಕ ಹೊಸತೊಂದು ಕೋಲಾಹಲ ಸೃಷ್ಟಿಸಿದ್ದಾರೆ.