ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಕಳಂಕಿತ ಹವಾಲಾ ಆರೋಪಿ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಬಿಜಿನೆಸ್ ಪಾಲುದಾರರಾಗಿದ್ದು, ಸರಕಾರಿ ಆಸ್ತಿಯನ್ನು ಸ್ವಂತದ ಐಷಾರಾಮಿ ಹೋಟೆಲ್ಗಳಾಗಿ ಪರಿವರ್ತಿಸುವ ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೊದಲನೇಯದಾಗಿ ಲಲಿತ್ ಮೋದಿ ಮತ್ತು ರಾಜೇ ವಹಿವಾಟು ಪಾಲುದಾರರು, ಎರಡನೇಯದಾಗಿ ಲಲಿತ್ ಮೋದಿ ಮಾರಿಷಿಯಸ್ ಬ್ಯಾಂಕ್ನಿಂದ 21 ಕೋಟಿ ರೂಪಾಯಿಗಳನ್ನು ರಾಜೇ ಪುತ್ರ ದುಶ್ಯಂತ್ ಸಿಂಗ್ ಖಾತೆಗೆ ವರ್ಗಾವಣೆ, ಮೂರನೇಯದು ಲಲಿತ್ ಮೋದಿ ಇಂಗ್ಲೆಂಡ್ ಪ್ರಯಾಣದ ದಾಖಲೆಗಳಿಗೆ ಸಹಿಹಾಕಿರುವುದು. ನಾಲ್ಕನೇಯದ್ದು ಇಂದು ಬಹಿರಂಗವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
1954 ರಲ್ಲಿ ಢೋಲಪುರ್ ಅರಮನೆಯ ಸಂಸ್ಥಾನ 1977ರಲ್ಲಿ ಸರಕಾರದೊಂದಿಗೆ ವಿಲೀನವಾಯಿತು. ಸರಕಾರದೊಂದಿಗೆ ವಿಲೀನವಾದ ನಂತರ ಅರಮನೆ ಸರಕಾರಿ ಆಸ್ತಿಯಾಗಿ ಹೊರಹೊಮ್ಮಿತು. ಡೋಲ್ಪುರ್ ಅರಮನೆ ಸರಕಾರಿ ಆಸ್ತಿ ಎಂದು ತಿಳಿದಿದ್ದರೂ ಕೂಡಾ ರಾಜೇ ಮತ್ತು ಲಲಿತ್ ಮೋದಿ ಅದನ್ನು ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸುವ ಸಂಚು ರೂಪಿಸಿದ್ದರು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.