ಬಿಜೆಪಿಯನ್ನು ಮಟ್ಟ ಹಾಕಲು ಒಂದಾಗುತ್ತಿರುವ ಲಾಲು- ನಿತೀಶ್

ಸೋಮವಾರ, 21 ಜುಲೈ 2014 (16:28 IST)
ಮುಂಬರುವ ಆಗಸ್ಟ್‌ನಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಗೆ ಜತೆಯಾಗಿ ಕಣಕ್ಕಿಳಿಯಲಿದ್ದೇವೆ ಎಂದು ಒಂದು ಕಾಲಕ್ಕೆ ಪರಮ ವಿರೋಧಿಗಳಾಗಿದ್ದ ಆರ್‌ಜೆಡಿ ಮತ್ತು ಜೆಡಿಯು ಪಕ್ಷಗಳು ಘೋಷಿಸಿವೆ. ಕೆಲವು ಶಾಸಕರು ರಾಜೀನಾಮೆ ನೀಡಿರುವುದರಿಂದ ಮತ್ತು ಕೆಲವರು ಸಂಸದರಾಗಿ ಆಯ್ಕೆ ಯಾಗಿರುವುದರಿಂದ, ತೆರವಾಗಿರುವ 10 ವಿಧಾನಸಭಾ ಸ್ಥಾನಗಳಿಗೆ ಅಗಸ್ಟ್ 21 ರಂದು ಚುನಾವಣೆಗಳು ನಡೆಯುತ್ತಿವೆ. 

ಬಿಜೆಪಿಯನ್ನು ಸೋಲಿಸುವುದಕ್ಕಾಗಿ ನಾವು ಒಂದಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಎರಡು ಪಕ್ಷಗಳ ಹಿರಿಯ ನಾಯಕರು ಸಮಾಲೋಚಿಸಿ ಸೀಟುಗಳನ್ನು ಹಂಚಲಿದ್ದಾರೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಬಸ್-ಹಿಸ್ತಾ ನಾರಾಯಣ್ ಸಿಂಗ್ ತಿಳಿಸಿದ್ದಾರೆ. 
 
ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಸಮಾಜವಾದಿ ಮತ್ತು ಜಾತ್ಯತೀತ ಪಕ್ಷಗಳಾದ ಆರ್‌ಜೆಡಿ ಮತ್ತು ಜೆಡಿಯು ಪಕ್ಷಗಳು  ಒಂದಾಗಲಿವೆ ಎಂದು ಈ ಮೊದಲು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದರು. ಅಲ್ಲದೇ ತಮ್ಮನ್ನು ತಾವು ಶೇರ್ ಶಾಗೆ ಹೋಲಿಸಿಕೊಂಡಿರುವ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಂಜಿ ,ಶೇರ್ ಶಾನಂತೆ ತಾನು ಕೂಡ ಒಂದು ವರ್ಷದ ಅವಧಿಯಲ್ಲಿ ಅಂದುಕೊಂಡ ಫಲಿತಾಂಶವನ್ನು ಪಡೆಯುತ್ತೇನೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ