ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧ್ಬುತ ಗೆಲುವನ್ನು ಸಾಧಿಸಿ, ಆರ್ಜೆಡಿ ಮತ್ತು ನಿತೀಶ್ ಕುಮಾರ್ರ ಪಕ್ಷವಾದ ಜೆಡಿಯುವನ್ನು ದೂಳಿಪಟವನ್ನಾಗಿಸಿತ್ತು. ಇದರ ನಂತರ 20 ವರ್ಷದಿಂದ ಶತ್ರುಗಳಾಗಿದ್ದ ನಿತೀಶ್ ಮತ್ತು ಲಾಲೂ ಇದೀಗ ಒಂದಾಗಿದ್ದಾರೆ. ಜೆಡಿಯು, ಕಾಂಗ್ರೆಸ್ ಮತ್ತು ಆರ್ಜೆಡಿ ಸೇರಿಕೊಂಡು ಈ ಬಾರಿಯ ವಿಧಾನ ಸಭೆ ಚುನಾವಣೆ ಎದುರಿಸಲಿದ್ದಾರೆ ಎಂದು ಬಿಜೆಪಿ ಸಂಸದ ಅಶ್ವಿನ್ ಚೌಬೆ ಹೇಳಿದ್ದಾರೆ.