ಗೋಮಾಂಸ ಸೇವನೆ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಲಾಲು ತಮ್ಮ ವೈಫಲ್ಯಗಳತ್ತ ಜನರ ಗಮನ ಹರಿಯದಿರಲು ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕಿಂತ ಮೊದಲು ಪ್ರಧಾನಿ ಮೋದಿ, ಹಿಂದುಗಳು ಕೂಡಾ ಗೋಮಾಂಸ ಸೇವನೆ ಮಾಡುತ್ತಾರೆ ಎನ್ನುವ ಲಾಲು ಹೇಳಿಕೆ ಯಾದವ ಕುಲಕ್ಕೆ ಕಳಂಕ ತರುವಂತಹದಾಗಿದೆ. ಜನತಾ ಪರಿವಾರವನ್ನು ಚುನಾವಣೆಯಲ್ಲಿ ಸೋಲಿಸಿ. ಇಲ್ಲವಾದಲ್ಲಿ ರಾಜ್ಯದಲ್ಲಿ ಮತ್ತೆ ಜಂಗಲ್ ರಾಜ್ ತಾಂಡವವಾಡುತ್ತದೆ ಎಂದು ಲಾಲು ವಿರುದ್ಧ ಗುಡುಗಿದ್ದರು.