ಸೇಸಾರಾಮ್ ಮತ್ತು ಔರಂಗಾಬಾದ್ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ಮೋದಿ, ನಿತೀಶ್ ಕುಮಾರ್, ಲಾಲು ಪ್ರಸಾದ್ ಮತ್ತು ಸೋನಿಯಾ ಗಾಂಧಿ ತಮ್ಮ 60 ವರ್ಷ ಅಧಿಕಾರದ ವಿವರಣೆಯನ್ನು ಜನತೆಗೆ ನೀಡಿಲ್ಲ. ಚುನಾವಣೆ ಪ್ರಚಾರದಲ್ಲಿ ಕೇವಲ ನನ್ನನ್ನು ಟೀಕಿಸುವುದನ್ನು ಬಿಟ್ಟು ಅಭಿವೃದ್ಧಿಯ ಪರ ಒಂದೇ ಒಂದು ಭಾಷಣ ಮಾಡಿಲ್ಲ ಎಂದು ಲೇವಡಿ ಮಾಡಿದರು.
ಜಂಗಲ್ ರಾಜ್ ಬಗ್ಗೆ ಆರೋಪಿಸಿದಾಗ ಬಿಹಾರ್ ಸಿಎಂ ನಿತೀಶ್ ಕುಮಾರ್ ವಿಚಲಿತರಾಗುತ್ತಾರೆಯೇ ಹೊರತು ಲಾಲು ಯಾದವ್ ಅಲ್ಲ. ಲಾಲು ಪ್ರಸಾದ್ ಯಾದವ್ ಅಧಿಕಾರವಧಿಯಲ್ಲಿ ಜಂಗಲ್ ರಾಜ್ ಅಧಿಕಾರವಿತ್ತು ಎಂದು ಹಿಂದೆ ಆರೋಪಿಸಿದ್ದ ನಿತೀಶ್ ಕುಮಾರ್ ಇದೀಗ, ಜಂಗಲ್ ರಾಜ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಬಿಹಾರ್ ರಾಜ್ಯಕ್ಕೆ ಮತ್ತೊಂದು ಬಾರಿ ಜಂಗಲ್ ರಾಜ್ ಅಗತ್ಯವಿದೆಯೇ ಎಂದು ಪ್ರಧಾನಿ ಮೋದಿ ಮತದಾರರನ್ನು ಪ್ರಶ್ನಿಸಿದರು.