ಲಾಲು ಯಾದವ್ ಕೃಷ್ಣನ ವಂಶಸ್ಥರಲ್ಲ, ಕಂಸನ ವಂಶಸ್ಥರು: ಬಾಬಾ ರಾಮದೇವ್

ಮಂಗಳವಾರ, 6 ಅಕ್ಟೋಬರ್ 2015 (20:15 IST)
ಹಿಂದುಗಳು ಗೋಮಾಂಸ ಸೇವನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ಯೋಗಾ ಗುರು ಬಾಬಾ ರಾಮದೇವ್ ವಾಗ್ದಾಳಿ ನಡೆಸಿದ್ದಾರೆ.
 
ಮಾಜಿ ಕೇಂದ್ರ ರೈಲ್ವೆ ಖಾತೆ ಸಚಿವ ಲಾಲು ಪ್ರಸಾದ್ ಯಾದವ್ ದೇಹದೊಳಗಿರುವ ದೆವ್ವ, ಗೋಮಾಂಸ ಸೇವನೆ ಮಾಡುವಂತೆ ಪ್ರಚೋದಿಸುತ್ತಿದೆ ಎಂದು ಹೇಳಿದ್ದಾರೆ. 
 
ಹಿಂದುಗಳು ಗೋಮಾಂಸ ಸೇವನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ ಲಾಲು ಯಾದವ್ ಯದುವಂಶ ಕುಲಕ್ಕೆ ಅಪಮಾನವೆಸಗಿದ್ದಾರೆ. ಇಂತಹ ಹೇಳಿಕೆ ನೀಡಿದ ಅವರು ಕೃಷ್ಣನ ವಂಶಸ್ಥರಂತೂ ಆಗಲು ಸಾಧ್ಯವಿಲ್ಲ. ಆದರೆ ಕಂಸನ ವಂಶಸ್ಥರಾಗಿರಬಹುದು ಎಂದು ಲೇವಡಿ ಮಾಡಿದ್ದಾರೆ.
 
ರಾಜ್ಯದಲ್ಲಿ ಗೋಮಾಂಸ ಮಾರಾಟಕ್ಕೆ ನಿಷೇಧ ಹೇರಿದ ಉತ್ತರಪ್ರದೇಶ ಸರಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಉತ್ತರಪ್ರದೇಶ ಸರಕಾರ ಗೋಮಾಂಸ ನಿಷೇಧಿಸಬಹುದಾದರೆ, ಪ್ರಧಾನಿ ಮೋದಿ, ದೇಶಾದ್ಯಂತ ಯಾಕೆ ಗೋಮಾಂಸ ನಿಷೇಧಿಸುತ್ತಿಲ್ಲ ಎಂದು ಬಾಬಾ ರಾಮದೇವ್ ಪ್ರಶ್ನಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ