ವಿಧಾನಸಭಾ ಕಲಾಪದ ವೇಳೆ ಮಾತನಾಡುತ್ತಿದ್ದ ಲಾನಗೇಟ್ ಕ್ಷೇತ್ರದ ಶಾಸಕರಾಗಿರುವ ಇಂಜಿನಿಯರ್ ರಶೀದ್, "ನಮ್ಮ ಪ್ರದೇಶಗಳ ರಸ್ತೆಗಳಲ್ಲಿ ನಾಯಿಗಳದೆ ದರ್ಬಾರು. ಜನರು ಹೊರಗಡೆ ತಿರುಗಾಡಲು ಹೆದರುತ್ತಿದ್ದಾರೆ. ಈ ನಾಯಿಗಳ ಸಮಸ್ಯೆಯಿಂದ ಮುಕ್ತಿ ದೊರಕಿಸಲು ನಿಮಗೆ ನಾನು 4 ತಿಂಗಳ ಸಮಯಾವಕಾಶವನ್ನು ಕೊಡುತ್ತೇನೆ. ಸರಕಾರ ಇದರಲ್ಲಿ ವಿಫಲವಾದರೆ ಪ್ರತಿಯೊಬ್ಬ ಶಾಸಕರ ಮನೆಗೆ ನಾನು ಐದೈದು ನಾಯಿಗಳನ್ನು ಬಿಡುತ್ತೇನೆ", ಎಂದರು.