ಮಗಳ ಬದುಕನ್ನು ಮೂರಾಬಟ್ಟೆ ಮಾಡಿದವನಿಗೆ ಜೀವಾವಧಿ

ಶುಕ್ರವಾರ, 17 ಫೆಬ್ರವರಿ 2017 (11:52 IST)
ಚಿತ್ರದುರ್ಗ: ಮಗಳು ಅಂತರ್ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಿದಳೆಂದು ಅವಳಿಗೆ ಹುಟ್ಟಿದ್ದ ಮಗುವನ್ನು ಕೊಂದಿದ್ದ ವ್ಯಕ್ತಿಗೆ ಇಲ್ಲಿನ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
 
ಚಿತ್ರದುರ್ಗದ ಚಳ್ಳಕೆರೆ ನಗರದ ಅಂಬೇಡ್ಕರ್ ಬಡಾವಣೆಯ ನಿವಾಸಿ ಮಂಜುನಾಥ್ ಮಗಳು  ನಾಗರತ್ನ, ವೀರೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕಳೆದೆರಡು ವರ್ಷಗಳ ಹಿಂದೆ ಈ ಮದುವೆ ನಡೆದಿತ್ತು. ಇಬ್ಬ ಪ್ರೇಮಫಲವಾಗಿ ಮಗುವು ಹುಟ್ಟಿತ್ತು.
ಮಗಳು ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಕಿಡಿಕಾರುತ್ತಿದ್ದ ಮಂಜುನಾಥ್ ಒಂದು ದಿನ ಮಗಳ ಮನೆಗೆ ನುಗ್ಗಿ ಮಲಗಿದ್ದ ಮಗು ಸೃಷ್ಟಿಯನ್ನು ಉಸಿರುಗಟ್ಟಿಸಿ ಕೊಂದಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಮಂಜುನಾಥ್‌ನನ್ನು ಬಂಧಿಸಿದ್ದರು.
 
ಆದರೆ ನಾಗರತ್ನ ಜೀವನದ ದುರಂತ ಅಲ್ಲಿಗೆ ನಿಲ್ಲಲಿಲ್ಲ. ಮಗಳನ್ನು ಕಳೆದುಕೊಂಡ ಕೊರಗಿನಲ್ಲಿ ಅನಾರೋಗ್ಯಕ್ಕೀಡಾಗಿ ವೀರೇಶ್ ಕೂಡ ಸಾವನ್ನಪ್ಪಿದ್ದ .
 
ಮತ್ತೀಗ ಮಂಜುನಾಥ್‌ಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.

ವೆಬ್ದುನಿಯಾವನ್ನು ಓದಿ