ಒಂದು ವಾರದ ಕಲಾಪ ಸಂಪೂರ್ಣವಾಗಿ ಕೋಲಾಹಲದಲ್ಲಿ ಕೊಚ್ಚಿ ಹೋದ ಬಳಿಕ ಇಂದು ಮತ್ತೆ ಆರಂಭವಾದ ಲೋಕಸಭೆಯ ಕಲಾಪ ಮತ್ತದೇ ಗದ್ದಲಕ್ಕೆ ಆಹುತಿಯಾಗಿ 30 ನಿಮಿಷ ಮುಂದೂಡಲ್ಪಟ್ಟಿತು. ಲಲಿತ್ ಮೋದಿ, ವ್ಯಾಪಮ್ ಮತ್ತು ಇತರ ವಿಷಯಗಳನ್ನಿಟ್ಟುಕೊಂಡು ನಡೆದ ಗಲಾಟೆಯಿಂದಾಗಿ ಪ್ರಶ್ನೋತ್ತರ ಅವಧಿಯಲ್ಲಿ ಕೇವಲ ಮೂರು ಪ್ರಶ್ನೆಗಳು ಕೇಳಲ್ಪಟ್ಟ ಬಳಿಕ ಕಲಾಪ ಮುಂದೂಡಲ್ಪಟ್ಟಿತು.
ಭೂ ಸ್ವಾಧೀನ ಮಸೂದೆಯನ್ನು ಕೈ ಬಿಡುವಂತೆ ವಿರೋಧ ಪ್ರದರ್ಶಿಸಿದ ತೃಣಮೂಲ ಕಾಂಗ್ರೆಸ್ ಸಂಸದರು, ಕಿಸಾನ್ ರೋ ರಹಾ ಹೈ, ಮೋದಿ ಸರ್ಕಾರ ಶೋ ರಹಾ ರೈ( ರೈತ ಅಳುತ್ತಿದ್ದಾನೆ, ಮೋದಿ ಸರ್ಕಾರ ನಿದ್ದೆ ಮಾಡುತ್ತಿದೆ) ಎಂದು ಘೋಷಣೆಗಳನ್ನು ಕೂಗಿದರು.