ಮಹಿಳೆಯ ದೂರಿನ ಪ್ರಕಾರ, ಆಕೆಯ ಪ್ರಿಯತಮ ಅನುಜ್ ಚೌಧರಿ ಲಾಲ್ಕುವಾನ್ ಪ್ರದೇಶದಲ್ಲಿ ಭೇಟಿಯಾಗುವಂತೆ ಆಹ್ವಾನ ನೀಡಿದ್ದನು. ಭೇಟಿಗಾಗಿ ತೆರಳಿದ್ದಾಗ ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ, ಪ್ರಜ್ಞೆ ತಪ್ಪಿದಾಗ ಇಬ್ಬರು ಆರೋಪಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಧಿರೇಂದ್ರ ಯಾದವ್ ತಿಳಿಸಿದ್ದಾರೆ.