ವಿಪರೀತ ಆಸೆ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂದು ನೆನಪಿರಲಿ. ನಾವೆಲ್ಲ ಆಡಳಿತದಲ್ಲಿ ಬದಲಾವಣೆಯನ್ನು ತರಲು ಬಯಸುತ್ತಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಸೀಟುಗಳನ್ನು ಪಡೆಯದಿದ್ದರು ಕೂಡ, ಸರಕಾರ ರಚನೆಯಾಗುವಾಗ ಎಲ್ಲರಿಗೂ ಸಮಪಾಲು ಸಿಗಲಿದೆ. ಅವೆಲ್ಲಕೂ ಮೊದಲು ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗಬೇಕು ಎಂದು ಅವರು ಹೇಳಿದ್ದಾರೆ.