ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷ ತಮ್ಮನ್ನು ಆಹ್ವಾನಿಸಲಿದೆ ಎಂದು ಶಿವಸೇನೆ ಮತ್ತು ಬಿಜೆಪಿ ಆತುರತೆಯಿಂದ ಕಾಯುತ್ತಿದ್ದರೆ, ಬಿಜೆಪಿ 12 ಪಕ್ಷೇತರರ ಬೆಂಬಲ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ವರದಿಯಾಗಿದೆ.
ಎನ್ಸಿಪಿ ಸಂಬಂಧಿಸಿದಂತೆ ಹೇಳುವುದಾದರೆ, ಶರದ್ ಪವಾರ್ ನೇತೃತ್ವದ ಪಕ್ಷದೊಟ್ಟಿಗೆ ಸರಕಾರ ರಚಿಸಿಕೊಂಡು ಗೊತ್ತಿದ್ದು, ಗೊತ್ತಿದ್ದು ಅಪಾಯವನ್ನು ಮೈಮೇಲೆಳೆದುಕೊಳ್ಳಲು ಬಿಜೆಪಿ ತಯಾರಿಲ್ಲ . ಚುನಾವಣೆಯ ಸಮಯದಲ್ಲಿ, ಪ್ರಧಾನಿ ಮೋದಿ ಎನ್ಸಿಪಿಯನ್ನು "ಸ್ವಾಭಾವಿಕವಾಗಿ ಲಂಚಗುಳಿ ಪಾರ್ಟಿ" ಎಂದು ಟೀಕಿಸಿ, ಅವರನ್ನು ತಿರಸ್ಕರಿಸುವಂತೆ ಮತದಾರರನ್ನು ಒತ್ತಾಯಿಸಿದ್ದರು.